Thursday, 22 September 2016

ಸೂರ್ಯನ ಪರ್ಯಾಯ ಪದಗಳು ಹಾಗೂ ಅವುಗಳ ವ್ಯುತ್ಪತ್ತಿ

೧. ಹೆಸರು : ಮಿತ್ರಃ
ಧಾತು : ಞಿ ಮಿದಾ (ಸ್ನೇಹನೇ) , ಕ್ತ ಪ್ರತ್ಯಯಃ
ವ್ಯುತ್ಪತ್ತಿ : ೧. ಪ್ರಮೀತೇಃ ತ್ರಾಯತೇ
೨. ಸಂಮಿನ್ವಾನೇ ದ್ರವತಿ ಇತಿ
೩. ಮೇದಯತೇ ಇತಿ
೪. ಮೇದ್ಯತಿ ಇತಿ ಮಿತ್ರಃ
ಅರ್ಥ : ಅಂಟಿಕೊಳ್ಳುವವನು / ಸ್ನೇಹ ಉಳ್ಳವನು / ಕಾಪಾಡುವವನು

೨. ಹೆಸರು : ರವಿಃ
ಧಾತು : ರು (ಶಬ್ದೇ) / ರುಙ್ (ಗತೌ)
ವ್ಯುತ್ಪತ್ತಿ : ರೂಯತೇ , ಸ್ತೂಯತೇ , ರವತೇ ವಾ ಇತಿ ರವಿಃ
ಅರ್ಥ : ಶಬ್ದವನ್ನುಂಟು ಮಾಡುವವನು / ಚಲಿಸುವವನು

೩. ಹೆಸರು : ಸೂರ್ಯಃ
ಧಾತು : ಷೂ (ಪ್ರೇರಣೇ) / ಸೃ (ಗತೌ)
ವ್ಯುತ್ಪತ್ತಿ : ೧. ಸವತಿ , ಪ್ರೇರಯತಿ , ಕರ್ಮಣಿ ಲೋಕಮ್
೨. ಸರತಿ ಆಕಾಶೇ ಇತಿ ಸೂರ್ಯಃ
ಅರ್ಥ : ಲೋಕವನ್ನು , ಜನರನ್ನು ಕರ್ಮದಲ್ಲಿ ಪ್ರೇರೇಪಿಸುವವನು / ಆಕಾಶದಲ್ಲಿ ಸಂಚರಿಸುವವನು / ಚಲಿಸುವವನು

೪. ಹೆಸರು : ಭಾನುಃ
ಧಾತು : ಭಾಸೃ (ದೀಪ್ತೌ)
ವ್ಯುತ್ಪತ್ತಿ : ಭಾತಿ ಇತಿ ಭಾನುಃ
ಅರ್ಥ : ಪ್ರಕಾಶಿಸುವವನು

೫. ಹೆಸರು : ಖಗಃ
ಧಾತು : ಗಮ್ಲೃ (ಗತೌ)
ವ್ಯುತ್ಪತ್ತಿ : ಖೇ ಗಚ್ಛತಿ ಇತಿ ಖಗಃ (ಖಮ್=ಆಕಾಶ)
ಅರ್ಥ : ಆಕಾಶದಲ್ಲಿ ಹೋಗುವವನು

೬. ಹೆಸರು : ಪೂಷಾ
ಧಾತು : ಪೂಷ (ವೃದ್ಧೌ)
ವ್ಯುತ್ಪತ್ತಿ : ಪೂಷತಿ ಇತಿ ಪೂಷಾ
ಅರ್ಥ : ವೃದ್ಧಿಸುವವನು


೭. ಹೆಸರು : ಹಿರಣ್ಯಗರ್ಭಃ
ಧಾತು : -
ವ್ಯುತ್ಪತ್ತಿ : ಹಿರಣ್ಯಸಾಮ್ಯಾತ್ ಹಿತಂ ರಮಣೀಯಂ ವಾ / ಹಿರಣ್ಯಂ ಪರಮಂ ಧಾಮ ತಸ್ಯ ಗರ್ಭಭೂತಃ = ಹಿರಣ್ಯಗರ್ಭಃ
ಅರ್ಥ : ಹಿರಣ್ಯ / ಸುವರ್ಣದ ಉತ್ಪತ್ತಿಗೆ ಕಾರಣನಾಗಿರುವ
(ಇದಕ್ಕೆ ವಿಷ್ಣು,ಬ್ರಹ್ಮ ಎಂಬುದೇ ಪ್ರಸಿದ್ಧಾರ್ಥ / ಸೂರ್ಯ ಎಂಬ ಅರ್ಥಕ್ಕೂ ಶಾಸ್ತ್ರೀಯ ಹಿನ್ನೆಲೆ ಇದೆ)

೮. ಹೆಸರು : ಮರೀಚಿಃ
ಧಾತು : ಮೃಙ್ (ಪ್ರಾಣತ್ಯಾಗೇ)
ವ್ಯುತ್ಪತ್ತಿ :ಮ್ರಿಯತೇ ತಮೋ ಅಸ್ಮಿನ್ ಇತಿ ಮರೀಚಿಃ
ಅರ್ಥ : ಕತ್ತಲೆಯನ್ನು ನಾಶಮಾಡುವವನು / ಸೂರ್ಯನ ಕಿರಣ

೯. ಹೆಸರು : ಆದಿತ್ಯಃ
ಧಾತು : -
ವ್ಯುತ್ಪತ್ತಿ :ಅದಿತೇಃ ಅಪತ್ಯಂ ಪುಮಾನ್
ಅರ್ಥ : ಅದಿತಿಯ ಮಗ

೧೦. ಹೆಸರು : ಸವಿತಾ
ಧಾತು : ಷೂ (ಪ್ರೇರಣೇ)
ವ್ಯುತ್ಪತ್ತಿ : ಸುವತಿ , ಪ್ರೇರಯತಿ ಇತಿ ಸವಿತಾ
ಅರ್ಥ : ಪ್ರೇರೇಪಿಸುವವನು

೧೧. ಹೆಸರು : ಅರ್ಕಃ
ಧಾತು : ಅರ್ಚ್ (ಪೂಜಾಯಾಮ್) / ಅರ್ಕ್ (ಸ್ತವನೇ)
ವ್ಯುತ್ಪತ್ತಿ : ಅರ್ಚ್ಯತೇ ಇತಿ ಅರ್ಕಃ / ಅರ್ಕ್ಯತೇ ಸ್ತೂಯತೇ ಇತಿ ಅರ್ಕಃ
ಅರ್ಥ : ಪೂಜಿಸಲ್ಪಡುವವನು / ಸ್ತುತಿಸಲ್ಪಡುವವನು

೧೨. ಹೆಸರು : ಭಾಸ್ಕರಃ
ಧಾತು : ಡು ಕೃಞ್ (ಕರಣೇ)
ವ್ಯುತ್ಪತ್ತಿ : ಭಾಸಂ ಕರೋತಿ ಇತಿ ಭಾಸ್ಕರಃ
ಅರ್ಥ : ಬೆಳಕನ್ನುಂಟು ಮಾಡುವವನು

೧೩. ಹೆಸರು : ನಾರಾಯಣಃ
ಧಾತು : -
ವ್ಯುತ್ಪತ್ತಿ : ನರಾಣಾಂ ಸಮೂಹೋ ನಾರಂ ತದಯನಮ್ ಅಸ್ಯ / ನರಾಂಜಾತಾನಿ ತತ್ವಾನಿ ಅಯನಮ್ ಅಸ್ಯ
ಅರ್ಥ : ಆತ್ಮಗಳ ಸಮೂಹ / ಮನುಷ್ಯರ ಮಾರ್ಗ / ವಿಷ್ಣು / ನಾರಾಯಣ


"ನಮಃ" ಶಬ್ದ ಬಂದಾಗ ಚತುರ್ಥೀ ವಿಭಕ್ತಿ ಬರಬೇಕೆಂಬುದು ವ್ಯಾಕರಣದ ನಿಯಮ.

ದೇಹಕ್ಕಿಂತ ದೇಶ ದೊಡ್ಡದು

I.C.S ಪರೀಕ್ಷೆಯಲ್ಲಿ ತೇರ್ಗಡೆಯಾದ ನೇತಾಜಿ ಉದ್ಯೋಗವನ್ನು ಸೇರಲು ಅರ್ಜಿ ಸಲ್ಲಿಸಿದರು.ಆದರೆ ಉದ್ಯೋಗವನ್ನು ಪಡೆಯಬೇಕೆಂದರೆ  ಒಂದು ಲಿಖಿತಪರೀಕ್ಷೆಯನ್ನು ಬರೆಯಬೇಕಿತ್ತು.ನೇತಾಜಿ ಪರೀಕ್ಷೆಯಲ್ಲಿ ಪಾಸಾಗಬೇಕೆಂದು ಹಗಲಿರುಳು ಅಧ್ಯಯನ ಮಾಡಿ,ಪರೀಕ್ಷೆಯನ್ನು ಬರೆಯಲು ಹೋದರು.ಪರೀಕ್ಷಾಕೊಠಡಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಪಡೆದು,ಎಲ್ಲಾ ಪ್ರಶ್ನೆಗಳನ್ನೂ ಒಂದು ಬಾರಿ ಓದಿದರು.ಅವುಗಳಲ್ಲಿ ಒಂದು ಪ್ರಶ್ನೆ "ಇಂಡಿಯನ್ ಸೋಲ್ಜರ್ಸ್ ಆರ್ ಜನರಲಿ ಡಿಸ್ ಆನೆಸ್ಟ್" ಎಂದಿತ್ತು.ಈ ಪ್ರಶ್ನೆಯನ್ನು ಮಾತೃಭಾಷೆಯಲ್ಲಿ ಅನುವಾದ ಮಾಡಬೇಕಿತ್ತು.ತಮ್ಮ ಆಸನದಿಂದೆದ್ದ ನೇತಾಜಿ ಸೀದಾ ನಿರೀಕ್ಷಕನ ಬಳಿ ತೆರಳಿದರು.ಈ ಪ್ರಶ್ನೆಯನ್ನು ಪ್ರಶ್ನೆಪತ್ರಿಕೆಯಿಂದ ತೆಗೆದುಹಾಕುವಂತೇ ಕೋರಿದರು.ನಿರೀಕ್ಷಕ ಒಪ್ಪಲಿಲ್ಲ."ಈ ಪ್ರಶ್ನೆ ಸರಿಯಾಗಿಯೇ ಇದೆ,ಉದ್ದೇಶಪೂರ್ವಕವಾಗಿಯೇ ನೀಡಲಾಗಿದೆ.ಇದಕ್ಕೆ ಉತ್ತರ ಬರೆದರಷ್ಟೇ ಉದ್ಯೋಗ.ಇಲ್ಲದಿದ್ದರೆ ಖಂಡಿತ ನಿನಗೆ ಉದ್ಯೋಗ ಸಿಗಲಾರದು" ಎಂದು ವಾದಿಸಿದ. ಪ್ರಶ್ನೆಯನ್ನು ಅನುವಾದ ಮಾಡಲು ನೇತಾಜಿಯವರ ದೇಶಪ್ರೇಮ ಒಪ್ಪಲಿಲ್ಲ."ಈ ಉದ್ಯೋಗದ ಅವಶ್ಯಕತೆ ನನಗಿಲ್ಲ.ನಮ್ಮ ದೇಶದ ಸೈನಿಕರನ್ನು ಅವಹೇಳನ ಮಾಡಿ ಉದ್ಯೋಗ ಪಡೆಯುವಂತಹ ನೀಚಮನಸ್ಥಿತಿ ನನ್ನದಲ್ಲ" ಎಂದು ಪ್ರಶ್ನೆಪತ್ರಿಕೆಯನ್ನು ಅಲ್ಲಿಯೇ ಹರಿದು ಬೀಸಾಕಿ ಪರೀಕ್ಷಾಕೊಠಡಿಯಿಂದ ಹೊರನಡೆದೇಬಿಟ್ಟರು..!! ನೇತಾಜಿ ಒಂದು ಕ್ಷಣ ಸ್ವಾರ್ಥಿಯಾಗಿದ್ದರೆ ಒಳ್ಳೆಯ ಉದ್ಯೋಗವನ್ನು ಸೇರಿ ಜೀವನಪರ್ಯಂತ ಸುಖವಾಗಿರಬಹುದಿತ್ತು.ಆದರೆ ಮನದಲ್ಲಿದ್ದ ಅದಮ್ಯ ದೇಶಪ್ರೇಮ ಸ್ವಾರ್ಥವಿಚಾರವನ್ನು ದೂರಮಾಡಿತ್ತು.ಉದ್ಯೋಗಕ್ಕಿಂತ ದೇಶಪ್ರೇಮವೇ ಹಿರಿದಾಗಿತ್ತು.ಯಾರ ವಿಚಾರ ಹಾಗೂ ಕರ್ಮಗಳು ಸದಾ ದೇಶದ ಒಳಿತನ್ನೇ ಬಯಸುತ್ತದೆಯೋ ಅಂತಹ ವ್ಯಕ್ತಿ ಮಹಾತ್ಮನಾಗುತ್ತಾನೆಂಬುದಕ್ಕೆ ಈ ಘಟನೆಯೇ ಸಾಕ್ಷಿ.