Saturday, 9 June 2018

ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ ಸುಂದರ ಸ್ತೋತ್ರಮಾಲೆ ಗುರ್ವಷ್ಟಕಮ್..

ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||1||
(ಮನುಷ್ಯನ ಶರೀರ ಸುಂದರವಾಗಿರಬಹುದು , ಆತನ ಪತ್ನಿಯೂ  ಸುಂದರಿಯಾಗಿರಬಹುದು , ಆತನ ಯಶಸ್ಸು ನಾಲ್ಕು ದಿಕ್ಕುಗಳಲ್ಲೂ ವ್ಯಾಪಿಸಿರಬಹುದು , ಸಂಪತ್ತು ಮೇರುಪರ್ವತದಷ್ಟಿರಬಹುದು ಆದರೂ ಆತನ ಮನಸ್ಸು ಗುರುಗಳ ಚರಣಾರವಿಂದಗಳಲ್ಲಿ ಆಸಕ್ತವಾಗಿರದಿದ್ದರೆ , ಈ ವಸ್ತುಗಳಿಂದೇನು ಪ್ರಯೋಜನ...?)


ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||2||
(ಹೆಂಡತಿ , ಹಣ , ಮಕ್ಕಳು , ಮೊಮ್ಮಕ್ಕಳು , ಮನೆ , ನೆಂಟರು ಇವೆಲ್ಲವೂ ಇದ್ದರೂ , ಮನುಷ್ಯನ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)


ಷಡಂಗಾದಿ ವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||3||
(ಮನುಷ್ಯ ಷಡಂಗ , ಶಾಸ್ತ್ರಗಳನ್ನು ಕಂಠಸ್ಥ ಮಾಡಿರಲಿ , ರಮಣೀಯವಾಗಿ ಕಾವ್ಯವನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿರಲಿ..ಆದರೂ ಮನುಷ್ಯನ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)



ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||4||
(ವಿದೇಶದಲ್ಲಿ ಯಾರು ಗೌರವಿಸಲ್ಪಡುತ್ತಾರೋ , ಸ್ವದೇಶದಲ್ಲಿ ಯಾರಿಗೆ ಜಯಕಾರ ಹಾಕುತ್ತಾರೋ , ಯಾರು ಸದಾಚಾರವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೋ ಆದರೂ ಅಂತವರ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು  ಪ್ರಯೋಜನ...?)



ಕ್ಷಮಾಮಂಡಲೇ ಭೂಪಭೂಪಾಲವೃಂದೈಃ
ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||5||
(ಯಾರ ವಿದ್ವತ್ತಿಗೆ ತಾಲೆಬಾಗಿ ಭೂಮಿಯಲ್ಲಿರುವ ಸಕಲ ರಾಜರೂ ಅಂತಹ ಮಹಾನುಭಾವ  ವಿದ್ವಾಂಸನ ಚರಣಕಮಲಗಳನ್ನು ಪೂಜಿಸುತ್ತಾರೋ , ಅಂತಹ ವಿದ್ವಾಂಸನ ಮನಸ್ಸೂ ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಅವನಿಂದೇನು ಪ್ರಯೋಜನ...?)



ಯಶೋ ಮೇ ಗತಂ ದಿಕ್ಷು ದಾನಪ್ರಭಾವಾತ್
ಜಗದ್ವಸ್ತು ಸರ್ವಂ ಕರೇ ಸತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||6||
(ತಾನು ಮಾಡುವ ದಾನದಿಂದ ಕೀರ್ತಿ ಸರ್ವತ್ರ ವ್ಯಾಪಕವಾಗಿದ್ದರೂ , ಗುರುಗಳ ಸಹಜ ದೃಷ್ಠಿಯಿಂದ ಸಕಲೈಶ್ವರ್ಯಗಳು ಪ್ರಾಪ್ತವಾಗಿದ್ದರೂ , ಮನುಷ್ಯರ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)


ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾಂತಾಸುಖೇ ನೈವ ವಿತ್ತೇಷು ಚಿತ್ತಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||7||
(ಯಾರ ಮನಸ್ಸು , ಭೋಗ , ಯೋಗ , ಅಶ್ವ , ರಾಜ್ಯ , ಧನದ ವಿಷಯಗಳಲ್ಲಿ ಚಂಚಲವಾಗದಿದ್ದರೂ ಅಂತಹ ಮನುಷ್ಯರ ಮನಸ್ಸೂ  ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು  ಪ್ರಯೋಜನ...?)



ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||8||
(ಯಾವುದೇ ಮನುಷ್ಯನ ಮನಸ್ಸು ಅರಣ್ಯದಲ್ಲಾಗಿರಲಿ , ಮನೆಯಲ್ಲಾಗಿರಲಿ , ಕಾರ್ಯದಲ್ಲಾಗಿರಲಿ , ಸ್ವಶರೀರದಲ್ಲಾಗಿರಲಿ , ಅಮೂಲ್ಯವಾದಂತಹ ಸಂಪತ್ತಿನಲ್ಲಾಗಿರಲಿ ಚಂಚಲವಾಗಿರದಿದ್ದರೂ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇದರಿಂದೇನು ಪ್ರಯೋಜನ...?)


ಗುರೋರಷ್ಟಕಂ ಯಃ ಪಠೇತ್ ಪುಣ್ಯದೇಹೀ
ಯತಿರ್ಭೂಪತಿಬ್ರಹ್ಮಚಾರೀ ಚ ಗೇಹೀ |
ಲಭೇತ್ ವಾಂಛಿತಾರ್ಥ ಪದಂ ಬ್ರಹ್ಮಸಂಜ್ಞಮ್
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ||9||
(ಸಂನ್ಯಾಸಿ , ರಾಜ , ಬ್ರಹ್ಮಚಾರಿ ಯಾರೇ ಈ ಗುರ್ವಷ್ಟಕವನ್ನು ಓದಿದರೂ ಅವರ  ಮನಸ್ಸಿನ ಆಸೆಗಳು ನೆರವೇರುತ್ತವೆ..ಅವರಿಗೆ ಬ್ರಹ್ಮಪದ ಸಿಗುತ್ತದೆ ಹಾಗೂ ಗುರುವಿನ ಆಜ್ಞೆಯನ್ನು ಶಿರಸಾ ಪಾಲಿಸುವವರಿಗೆ ಸನ್ಮಂಗಲವುಂಟಾಗುತ್ತದೆ.)

No comments:

Post a Comment