ನಮ್ಮ ದೇಶದ ಸಂಸ್ಕೃತಿಯೇ ಅಂತದ್ದು, ವಿವಿಧತೆಯಲ್ಲಿ ಏಕತೆ ನಮ್ಮ ಧ್ಯೇಯ.ನಮ್ಮಲ್ಲಿರುವ
ಭಾಷೆಗಳೆಷ್ಟು..?ನಮ್ಮಲ್ಲಿರುವ ರಾಜ್ಯಗಳೆಷ್ಟು..?ನಮ್ಮಲ್ಲಿರುವ
ಧರ್ಮಗಳೆಷ್ಟು..?ನಮ್ಮಲ್ಲಿರುವ ಸಂಸ್ಕೃತಿಗಳೆಷ್ಟು..? ಇಂದಿಗೂ ಭಾರತವೆಂದರೆ ಇಡೀ
ಜಗತ್ತೇ ನಿಬ್ಬೆರಗಾಗಿ ನೋಡುತ್ತದೆ.ಒಂದು ಭಾಷೆ , ಸಂಸ್ಕೃತಿ , ಧರ್ಮವನ್ನಿಟ್ಟುಕೊಂಡೆ
ಸರಿಯಾಗಿ ಬಾಳಲಾಗದ ರಾಷ್ಟ್ರಗಳು ನಮ್ಮ ದೇಶದ ಸಾಮರಸ್ಯವನ್ನು ನೋಡಿ
ಅಚ್ಚರಿಗೊಳ್ಳುತ್ತಿವೆ. ಹೌದು, ನಮ್ಮದು Incredible India. .
ನಮ್ಮಲ್ಲಿ ಹಲವು ಪಕ್ಷಗಳಿರಬಹುದು , ಹಲವು ಪಂಥಗಳಿರಬಹುದು , ಹಲವು
ಧರ್ಮಗಳಿರಬಹುದು..ಆದರೆ ಮನದಲ್ಲಿರಬೇಕಾದ ಭಾವನೆಯೊಂದೇ, ಅದು ಭಾರತ, ಜನ್ಮಭೂಮಿಯ
ಭಕ್ತಿ, ನಾವೆಲ್ಲರೂ ಭಾರತೀಯರೆಂಬ ಸದ್ಭಾವನೆ.
ಪಕ್ಷಾತೀತರಾಗಿ , ಧರ್ಮಾತೀತರಾಗಿ , ಪಂಥಾತೀತರಾಗಿ ದೇಶಸೇವೆ ಮಾಡುವುದು ಪ್ರತಿಯೊಬ್ಬ
ಭಾರತೀಯನ ಕರ್ತವ್ಯ..ಈ ದೇಶದಲ್ಲಿ ನಾವೇನು ಅನುಭವಿಸಿಲ್ಲ..?ಇಲ್ಲಿ
ಜನ್ಮವೆತ್ತಿದ್ದೇವೆ..ಇಲ್ಲಿನ ನೀರನ್ನು ಕುಡಿಯುತ್ತಿದ್ದೇವೆ..ಇಲ್ಲಿನ ಗಾಳಿಯನ್ನು
ಉಸಿರಾಡುತ್ತಿದ್ದೇವೆ..ಪ್ರತಿಯೊಂದು ಸವಲತ್ತುಗಳನ್ನು ಪಡೆದಿದ್ದೇವೆ..ಮುಖ್ಯವಾಗಿ
ಯಾರಿಗೂ ತಲೆಬಾಗದೇ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ.
ಪ್ರಪಂಚದ ಯಾವುದೇ ದೇಶಕ್ಕೆ ಹೋಗಿ..ಮಾತೃಭೂಮಿಯಲ್ಲಿ ಸಿಗುವಷ್ಟು ಗೌರವ ನಿಮಗೆ
ಸಿಗುವುದಿಲ್ಲ..ಯಾವುದೋ ಒಂದು ಪರಕೀಯ ಭಾವನೆ ನಿಮ್ಮನ್ನು ಕಾಡುತ್ತಲೇ
ಇರುತ್ತದೆ..ಕೆಲವೊಂದು ದೇಶಗಳಲ್ಲಿ ಅನ್ಯಾಯವಾದಾಗ ಪ್ರತಿಭಟಿಸುವ
ಹಕ್ಕಿಲ್ಲ..ನಿರಾತಂಕವಾಗಿ ಓಡಾಡುವ ಹಾಗಿಲ್ಲ..ನೆಮ್ಮದಿಯಾಗಿ ಜೀವಿಸುವಂತಿಲ್ಲ.ಅಲ್ಲಿನ
ವ್ಯವಸ್ಥೆಯ ಬಗ್ಗೆ ಮಾತನಾಡುವಂತಿಲ್ಲ.
ಆದರೆ ನಮ್ಮಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ...ಅನ್ಯಾಯವಾದಾಗ
ಪ್ರತಿಭಟಿಸುವ ಹಕ್ಕಿದೆ..ಹಾಗೇ ಮೂಲಭೂತ ಕರ್ತವ್ಯಗಳೂ ಇವೆ..ಭಾರತವಾಸಿಗಳಾದ ನಾವು
ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಾದ್ದು ಅತ್ಯಗತ್ಯ..ದೇಶಸೇವೆ ಯಾವುದೇ ಪಕ್ಷಕ್ಕೆ
ಸೀಮಿತವಲ್ಲ..ಯಾವುದೇ ಸಂಘ-ಪರಿವಾರದ ಕರ್ತವ್ಯವಲ್ಲ..ಯಾವುದೇ ನಾಯಕನ ಸ್ವತ್ತಲ್ಲ.
ದೇಶಸೇವೆ ಪ್ರತಿಯೊಬ್ಬ ಭಾರತೀಯನ ನಾಡಿಮಿಡಿತ..ಜನ್ಮಭೂಮಿಯ ಹಿತಕ್ಕಿರಲಿ ಮನದ
ತುಡಿತ..ನಾವೆಲ್ಲರೂ ಭಾರತೀಯರು.ಭಾರತಮಾತೆ ನಮ್ಮೆಲ್ಲರ ತಾಯಿ..ಅವಳ ಮಕ್ಕಳು
ನಾವು..ಮನೆಮಕ್ಕಳು ಕಾದಾಡುವುದನ್ನು ಬಿಟ್ಟು ಮನೆಯೊಳಿತಿಗಾಗಿ ಶ್ರಮಿಸಿದರಾಗದೇ...?
ಭಾಷೆಗಳೆಷ್ಟು..?ನಮ್ಮಲ್ಲಿರುವ ರಾಜ್ಯಗಳೆಷ್ಟು..?ನಮ್ಮಲ್ಲಿರುವ
ಧರ್ಮಗಳೆಷ್ಟು..?ನಮ್ಮಲ್ಲಿರುವ ಸಂಸ್ಕೃತಿಗಳೆಷ್ಟು..? ಇಂದಿಗೂ ಭಾರತವೆಂದರೆ ಇಡೀ
ಜಗತ್ತೇ ನಿಬ್ಬೆರಗಾಗಿ ನೋಡುತ್ತದೆ.ಒಂದು ಭಾಷೆ , ಸಂಸ್ಕೃತಿ , ಧರ್ಮವನ್ನಿಟ್ಟುಕೊಂಡೆ
ಸರಿಯಾಗಿ ಬಾಳಲಾಗದ ರಾಷ್ಟ್ರಗಳು ನಮ್ಮ ದೇಶದ ಸಾಮರಸ್ಯವನ್ನು ನೋಡಿ
ಅಚ್ಚರಿಗೊಳ್ಳುತ್ತಿವೆ. ಹೌದು, ನಮ್ಮದು Incredible India. .
ನಮ್ಮಲ್ಲಿ ಹಲವು ಪಕ್ಷಗಳಿರಬಹುದು , ಹಲವು ಪಂಥಗಳಿರಬಹುದು , ಹಲವು
ಧರ್ಮಗಳಿರಬಹುದು..ಆದರೆ ಮನದಲ್ಲಿರಬೇಕಾದ ಭಾವನೆಯೊಂದೇ, ಅದು ಭಾರತ, ಜನ್ಮಭೂಮಿಯ
ಭಕ್ತಿ, ನಾವೆಲ್ಲರೂ ಭಾರತೀಯರೆಂಬ ಸದ್ಭಾವನೆ.
ಪಕ್ಷಾತೀತರಾಗಿ , ಧರ್ಮಾತೀತರಾಗಿ , ಪಂಥಾತೀತರಾಗಿ ದೇಶಸೇವೆ ಮಾಡುವುದು ಪ್ರತಿಯೊಬ್ಬ
ಭಾರತೀಯನ ಕರ್ತವ್ಯ..ಈ ದೇಶದಲ್ಲಿ ನಾವೇನು ಅನುಭವಿಸಿಲ್ಲ..?ಇಲ್ಲಿ
ಜನ್ಮವೆತ್ತಿದ್ದೇವೆ..ಇಲ್ಲಿನ ನೀರನ್ನು ಕುಡಿಯುತ್ತಿದ್ದೇವೆ..ಇಲ್ಲಿನ ಗಾಳಿಯನ್ನು
ಉಸಿರಾಡುತ್ತಿದ್ದೇವೆ..ಪ್ರತಿಯೊಂದು ಸವಲತ್ತುಗಳನ್ನು ಪಡೆದಿದ್ದೇವೆ..ಮುಖ್ಯವಾಗಿ
ಯಾರಿಗೂ ತಲೆಬಾಗದೇ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ.
ಪ್ರಪಂಚದ ಯಾವುದೇ ದೇಶಕ್ಕೆ ಹೋಗಿ..ಮಾತೃಭೂಮಿಯಲ್ಲಿ ಸಿಗುವಷ್ಟು ಗೌರವ ನಿಮಗೆ
ಸಿಗುವುದಿಲ್ಲ..ಯಾವುದೋ ಒಂದು ಪರಕೀಯ ಭಾವನೆ ನಿಮ್ಮನ್ನು ಕಾಡುತ್ತಲೇ
ಇರುತ್ತದೆ..ಕೆಲವೊಂದು ದೇಶಗಳಲ್ಲಿ ಅನ್ಯಾಯವಾದಾಗ ಪ್ರತಿಭಟಿಸುವ
ಹಕ್ಕಿಲ್ಲ..ನಿರಾತಂಕವಾಗಿ ಓಡಾಡುವ ಹಾಗಿಲ್ಲ..ನೆಮ್ಮದಿಯಾಗಿ ಜೀವಿಸುವಂತಿಲ್ಲ.ಅಲ್ಲಿನ
ವ್ಯವಸ್ಥೆಯ ಬಗ್ಗೆ ಮಾತನಾಡುವಂತಿಲ್ಲ.
ಆದರೆ ನಮ್ಮಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ...ಅನ್ಯಾಯವಾದಾಗ
ಪ್ರತಿಭಟಿಸುವ ಹಕ್ಕಿದೆ..ಹಾಗೇ ಮೂಲಭೂತ ಕರ್ತವ್ಯಗಳೂ ಇವೆ..ಭಾರತವಾಸಿಗಳಾದ ನಾವು
ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಾದ್ದು ಅತ್ಯಗತ್ಯ..ದೇಶಸೇವೆ ಯಾವುದೇ ಪಕ್ಷಕ್ಕೆ
ಸೀಮಿತವಲ್ಲ..ಯಾವುದೇ ಸಂಘ-ಪರಿವಾರದ ಕರ್ತವ್ಯವಲ್ಲ..ಯಾವುದೇ ನಾಯಕನ ಸ್ವತ್ತಲ್ಲ.
ದೇಶಸೇವೆ ಪ್ರತಿಯೊಬ್ಬ ಭಾರತೀಯನ ನಾಡಿಮಿಡಿತ..ಜನ್ಮಭೂಮಿಯ ಹಿತಕ್ಕಿರಲಿ ಮನದ
ತುಡಿತ..ನಾವೆಲ್ಲರೂ ಭಾರತೀಯರು.ಭಾರತಮಾತೆ ನಮ್ಮೆಲ್ಲರ ತಾಯಿ..ಅವಳ ಮಕ್ಕಳು
ನಾವು..ಮನೆಮಕ್ಕಳು ಕಾದಾಡುವುದನ್ನು ಬಿಟ್ಟು ಮನೆಯೊಳಿತಿಗಾಗಿ ಶ್ರಮಿಸಿದರಾಗದೇ...?
No comments:
Post a Comment