ಪ್ರಪಂಚದಲ್ಲಿ ಉತ್ಪತ್ತಿಯಾದ ಪ್ರತಿಯೊಂದು ವಸ್ತುವಿಗೂ "ಬೀಜ" ಅಂದರೆ ಮೂಲಕಾರಣ
ಇರಲೇಬೇಕು. ಬೀಜದಿಂದ ಉತ್ಪತ್ತಿಯಾದ ವಸ್ತು ವಿಕಾಸವನ್ನು ಹೊಂದಲೇಬೇಕು.
ಆಧುನಿಕವಿಜ್ಞಾನದ ಮೂಲಕಾರಣ ಯಾವುದು..? ವಿಜ್ಞಾನದ ಮೂಲ ಎಲ್ಲಿಂದ ಬಂತು..?
ಪ್ರಪ್ರಥಮವಾಗಿ ವಿಜ್ಞಾನರೂಪಿ ಬೀಜವನ್ನು ಬಿತ್ತಿದವರು ಯಾರು..? ಇವು ಮೂಲಭೂತ
ಪ್ರಶ್ನೆಗಳು. ಎಲ್ಲವನ್ನೂ ವಿಜ್ಞಾನಿಗಳೇ ಕಂಡುಹಿಡಿದರು ಎಂಬುದು ಮೂರ್ಖತ್ವದ
ಪರಮಾವಧಿ..!! ಹಾಗಾದರೆ ವಿಜ್ಞಾನದ ಆವಿರ್ಭಾವವಾಗಿದ್ದು ಹೇಗೆ..? ಜಗತ್ತಿನ
ಮೊಟ್ಟಮೊದಲ ವಿಜ್ಞಾನಿ ಈ ಜಗತ್ತಿನ ಸೃಷ್ಟಿಕರ್ತ ಅಂದರೆ ಭಗವಂತ..!! ಆತನಿಂದಲೇ
ವಿಜ್ಞಾನದ ಉಗಮ ಹಾಗೂ ವಿಕಾಸ..!! ಹೇಗೆಂದು ನೋಡೋಣ.
ವಿಚಾರವಾದಿಗಳ ಪ್ರಕಾರ ವಿಜ್ಞಾನ ಹಾಗೂ ಆಧ್ಯಾತ್ಮ ಪರಸ್ಪರ ವಿರೋಧಿ ತತ್ವಗಳು. ಇದು
ತಪ್ಪು ಗ್ರಹಿಕೆ. ಆಧ್ಯಾತ್ಮ ಹಾಗೂ ಆಧುನಿಕವಿಜ್ಞಾನವನ್ನು ಗಂಭೀರವಾಗಿ
ವಸ್ತುನಿಷ್ಟವಾಗಿ ಅಧ್ಯಯನ ಮಾಡಿದರೆ ವಿಜ್ಞಾನ ಹಾಗೂ ಆಧ್ಯಾತ್ಮಗಳ ಸಾಮ್ಯತೆಯ
ಅರಿವಾಗುತ್ತದೆ. ಆಧುನಿಕ ವಿಜ್ಞಾನದಲ್ಲಿ ಹಲವಾರು ಶಾಖೆಗಳಿವೆ. ಅವುಗಳಲ್ಲಿ
ಭೌತಶಾಸ್ತ್ರ ಈ ಬ್ರಹ್ಮಾಂಡದ ಉತ್ಪತ್ತಿ ಹಾಗೂ ಸಂರಚನೆಯ ಬಗ್ಗೆ ಹಲವು ವಿಷಯಗಳನ್ನು
ತಿಳಿಸುತ್ತದೆ. ಭೌತಶಾಸ್ತ್ರದ ಎರಡು ಶಾಖೆಗಳು ಬಹಳ ಮಹತ್ವವನ್ನು ಹೊಂದಿವೆ. ಅವು
ಜನರಲ್ ರಿಲೇಟಿವಿಟಿ (General Relativity) ಹಾಗೂ ಕ್ಯಾಂಟಮ್ ಮೆಕೆನಿಕ್ಸ್(Quantum
Mechanics) ಎಂಬವು.
ಗಣಿತಶಾಸ್ತ್ರವನ್ನು ಆಧುನಿಕ ವಿಜ್ಞಾನಗಳ ಜನನಿಯೆಂದು ಕರೆಯಲಾಗುತ್ತದೆ. ವಿಜ್ಞಾನದ
ಬೆಳವಣಿಗೆಯಲ್ಲಿ ಗಣಿತಶಾಸ್ತ್ರದ ಕೊಡುಗೆ ದೊಡ್ಡದು. ಆಧುನಿಕ ಗಣಿತಶಾಸ್ತ್ರದ (Modern
Mathematics) ವ್ಯಾಪ್ತಿ ಸಮುದ್ರದಷ್ಟು ವಿಶಾಲವಾಗಿದೆ. ಗಣಿತದಲ್ಲಿ ಸಮುಚ್ಚಯ
ಸಿದ್ಧಾಂತ (Set Theory), ಸಂಖ್ಯಾ ಸಿದ್ಧಾಂತ (Number Theory), ಫಲನ ಹಾಗೂ ತರ್ಕ
ಸಿದ್ಧಾಂತ(Theory of Functions and Logic), ಅಂಶಿಕ ಹಾಗೂ ಸಾಧಾರಣ ಅವಕಲನ
ಸಮೀಕರಣ(Partial and Ordinary Differential Equations), ಬೀಜಗಣಿತ(Algebra)
ಮುಂತಾದ ಹಲವು ಶಾಖೆಗಳಿವೆ.
ಗಣಿತವನ್ನು ಬಿಟ್ಟು ಆಧುನಿಕ ವಿಜ್ಞಾನ(Modern Science) ಹಾಗೂ ತಂತ್ರಜ್ಞಾನದ
(Technology) ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಗಣಿತದ ಜನನಿ ಯಾರು..?
ಗಣಿತದ ಮೂಲಕಾರಣ ಯಾವುದು..? ಗೌಸ್(Gauss) ಎಂಬ ಪ್ರಸಿದ್ಧ ಗಣಿತಜ್ಞ "ಗಣಿತಶಾಸ್ತ್ರ
ಆಧುನಿಕ ವಿಜ್ಞಾನದ ಜನನಿ , ಗಣಿತದ ಜನನಿ ಸಂಖ್ಯಾಸಿದ್ಧಾಂತ" ಎಂದು ಹೇಳಿದ್ದಾನೆ.
ಹಾಗಾದರೆ ಸಂಖ್ಯಾಸಿದ್ಧಾಂತದ ಮೂಲಕಾರಣ ಯಾವುದು..? ಸಂಖ್ಯಾಸಿದ್ಧಾಂತದ ಮೂಲ
ಪ್ರಾಕೃತಿಕ (Natural Numbers) ಸಂಖ್ಯೆಗಳೆಂದು ಗಣಿತಜ್ಞರು ಹೇಳುತ್ತಾರೆ.
ಪ್ರಾಕೃತಿಕ ಸಂಖ್ಯೆಗಳಿಂದ ಸಂಖ್ಯಾಸಿದ್ಧಾಂತದ ವಿಕಾಸ, ಸಂಖ್ಯಾಸಿದ್ಧಾಂತದಿಂದ ಗಣಿತ,
ಗಣಿತದಿಂದ ಆಧುನಿಕವಿಜ್ಞಾನದ ವಿಕಾಸವೆಂದು ವಿಜ್ಞಾನಿಗಳೂ ಸಹ ನಂಬುತ್ತಾರೆ.
ಸಂಖ್ಯೆಗಳನ್ನು ಕಂಡುಹಿಡಿದಿದ್ದು ಮನುಷ್ಯರಲ್ಲ. ಅದು ಪ್ರಕೃತಿಯ ಕೊಡುಗೆ. ಕೇವಲ
ಮನುಷ್ಯರಿಗಷ್ಟೇ ಅಲ್ಲ, ಪಶು-ಪಕ್ಷಿಗಳಿಗೂ ಸಹ ಗಣನೆಯ ಜ್ಞಾನವಿರುತ್ತದೆ..!!
ಉದಾಹರಣೆಗೆ ಯಾವುದೋ ಒಂದು ಪಕ್ಷಿ ತನ್ನ ಗೂಡಿನಲ್ಲಿ ಹಲವು ಮರಿಗಳೊಂದಿಗೆ
ವಾಸವಿರುತ್ತದೆ. ದುರ್ದೈವವಶಾತ್ ಒಂದು ದಿನ ಪಕ್ಷಿಯ ಕೆಲವು ಮರಿಗಳು
ನಾಪತ್ತೆಯಾಗುತ್ತವೆ. ಆ ವಿಷಯ ಪಕ್ಷಿಗೆ ತಿಳಿದು ಆತಂಕದಿಂದ ಅತ್ತ ಇತ್ತ ಕಿರುಚುತ್ತಾ
ಹಾರಾಡುವುದನ್ನು ನೋಡಬಹುದು. ಮನೆಯಲ್ಲಿರುವ ಬೆಕ್ಕು ಮೂರು ಮರಿಗಳನ್ನು ಹಾಕಿರುತ್ತದೆ.
ಅವುಗಳಲ್ಲಿ ಒಂದು ಮರಿ ನಾಪತ್ತೆಯಾದರೆ ಬೆಕ್ಕಿನ ಪ್ರಲಾಪ ಹೇಗಿರುತ್ತದೆಂಬುದನ್ನು
ಗಮನಿಸಬಹುದು. ಹಾಗಾದರೆ ಪಶು ಪಕ್ಷಿಗಳಿಗೆ ಸಂಖ್ಯಾಜ್ಞಾನವನ್ನು ನೀಡಿದವರು ಯಾರು..?
ಯಾರೂ ಅಲ್ಲ ಪ್ರಕೃತಿಯೇ. ಪ್ರಕೃತಿ ನೀಡಿದ ಗಣನಾಸಾಮರ್ಥ್ಯದಿಂದ ಪಶುಪಕ್ಷಿಗಳೂ ಸಹ
ಸಂಖ್ಯೆಯನ್ನು ಅರಿಯಲು ಸಮರ್ಥವಾಗಿವೆ.
ಹಾಗಾದರೆ ಪ್ರಾಕೃತಿಕ ಸಂಖ್ಯೆಗಳ ಮೂಲಕಾರಣ ಯಾವುದು..? ಅದು ಪ್ರಕೃತಿ. ಪ್ರಕೃತಿಯ
ಮೂಲಕಾರಣ ಯಾರು ? ಭಗವಂತ..!! ಕ್ರೋನೆಕರ್ (Kronecker) ಎಂಬ ಗಣಿತಜ್ಞ ‘Natural
numbers are God given bricks’(ಪ್ರಾಕೃತಿಕ ಸಂಖ್ಯೆಗಳು ದೇವರು ಕೊಟ್ಟ ಇಟ್ಟಿಗೆ)
ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
ಹೇಗೆ ಇಟ್ಟಿಗೆಗಳಿಂದ ಭವನಗಳನ್ನು ನಿರ್ಮಿಸುತ್ತೇವೆಯೋ ಹಾಗೇ ಪ್ರಾಕೃತಿಕಸಂಖ್ಯೆಗಳಿಂದ
ಸಂಖ್ಯಾಸಿದ್ಧಾಂತದ ನಿರ್ಮಾಣವಾಗುತ್ತದೆ. ಸಂಖ್ಯಾಸಿದ್ಧಾಂತದಿಂದ ಗಣಿತ, ಗಣಿತದಿಂದ
ಆಧುನಿಕ ವಿಜ್ಞಾನದ ವಿಕಾಸವಾಗುತ್ತದೆ. ಹಾಗಾಗಿ ವಿಜ್ಞಾನದ ಮೂಲಕಾರಣ ಯಾರು..? ಭಗವಂತ.
ಆತನಿಂದ ಸೃಷ್ಟಿಸಲ್ಪಟ್ಟ ಪ್ರಕೃತಿ ಎಂಬುದು ಸ್ಪಷ್ಟವಾಗುತ್ತದೆ.
ಇರಲೇಬೇಕು. ಬೀಜದಿಂದ ಉತ್ಪತ್ತಿಯಾದ ವಸ್ತು ವಿಕಾಸವನ್ನು ಹೊಂದಲೇಬೇಕು.
ಆಧುನಿಕವಿಜ್ಞಾನದ ಮೂಲಕಾರಣ ಯಾವುದು..? ವಿಜ್ಞಾನದ ಮೂಲ ಎಲ್ಲಿಂದ ಬಂತು..?
ಪ್ರಪ್ರಥಮವಾಗಿ ವಿಜ್ಞಾನರೂಪಿ ಬೀಜವನ್ನು ಬಿತ್ತಿದವರು ಯಾರು..? ಇವು ಮೂಲಭೂತ
ಪ್ರಶ್ನೆಗಳು. ಎಲ್ಲವನ್ನೂ ವಿಜ್ಞಾನಿಗಳೇ ಕಂಡುಹಿಡಿದರು ಎಂಬುದು ಮೂರ್ಖತ್ವದ
ಪರಮಾವಧಿ..!! ಹಾಗಾದರೆ ವಿಜ್ಞಾನದ ಆವಿರ್ಭಾವವಾಗಿದ್ದು ಹೇಗೆ..? ಜಗತ್ತಿನ
ಮೊಟ್ಟಮೊದಲ ವಿಜ್ಞಾನಿ ಈ ಜಗತ್ತಿನ ಸೃಷ್ಟಿಕರ್ತ ಅಂದರೆ ಭಗವಂತ..!! ಆತನಿಂದಲೇ
ವಿಜ್ಞಾನದ ಉಗಮ ಹಾಗೂ ವಿಕಾಸ..!! ಹೇಗೆಂದು ನೋಡೋಣ.
ವಿಚಾರವಾದಿಗಳ ಪ್ರಕಾರ ವಿಜ್ಞಾನ ಹಾಗೂ ಆಧ್ಯಾತ್ಮ ಪರಸ್ಪರ ವಿರೋಧಿ ತತ್ವಗಳು. ಇದು
ತಪ್ಪು ಗ್ರಹಿಕೆ. ಆಧ್ಯಾತ್ಮ ಹಾಗೂ ಆಧುನಿಕವಿಜ್ಞಾನವನ್ನು ಗಂಭೀರವಾಗಿ
ವಸ್ತುನಿಷ್ಟವಾಗಿ ಅಧ್ಯಯನ ಮಾಡಿದರೆ ವಿಜ್ಞಾನ ಹಾಗೂ ಆಧ್ಯಾತ್ಮಗಳ ಸಾಮ್ಯತೆಯ
ಅರಿವಾಗುತ್ತದೆ. ಆಧುನಿಕ ವಿಜ್ಞಾನದಲ್ಲಿ ಹಲವಾರು ಶಾಖೆಗಳಿವೆ. ಅವುಗಳಲ್ಲಿ
ಭೌತಶಾಸ್ತ್ರ ಈ ಬ್ರಹ್ಮಾಂಡದ ಉತ್ಪತ್ತಿ ಹಾಗೂ ಸಂರಚನೆಯ ಬಗ್ಗೆ ಹಲವು ವಿಷಯಗಳನ್ನು
ತಿಳಿಸುತ್ತದೆ. ಭೌತಶಾಸ್ತ್ರದ ಎರಡು ಶಾಖೆಗಳು ಬಹಳ ಮಹತ್ವವನ್ನು ಹೊಂದಿವೆ. ಅವು
ಜನರಲ್ ರಿಲೇಟಿವಿಟಿ (General Relativity) ಹಾಗೂ ಕ್ಯಾಂಟಮ್ ಮೆಕೆನಿಕ್ಸ್(Quantum
Mechanics) ಎಂಬವು.
ಗಣಿತಶಾಸ್ತ್ರವನ್ನು ಆಧುನಿಕ ವಿಜ್ಞಾನಗಳ ಜನನಿಯೆಂದು ಕರೆಯಲಾಗುತ್ತದೆ. ವಿಜ್ಞಾನದ
ಬೆಳವಣಿಗೆಯಲ್ಲಿ ಗಣಿತಶಾಸ್ತ್ರದ ಕೊಡುಗೆ ದೊಡ್ಡದು. ಆಧುನಿಕ ಗಣಿತಶಾಸ್ತ್ರದ (Modern
Mathematics) ವ್ಯಾಪ್ತಿ ಸಮುದ್ರದಷ್ಟು ವಿಶಾಲವಾಗಿದೆ. ಗಣಿತದಲ್ಲಿ ಸಮುಚ್ಚಯ
ಸಿದ್ಧಾಂತ (Set Theory), ಸಂಖ್ಯಾ ಸಿದ್ಧಾಂತ (Number Theory), ಫಲನ ಹಾಗೂ ತರ್ಕ
ಸಿದ್ಧಾಂತ(Theory of Functions and Logic), ಅಂಶಿಕ ಹಾಗೂ ಸಾಧಾರಣ ಅವಕಲನ
ಸಮೀಕರಣ(Partial and Ordinary Differential Equations), ಬೀಜಗಣಿತ(Algebra)
ಮುಂತಾದ ಹಲವು ಶಾಖೆಗಳಿವೆ.
ಗಣಿತವನ್ನು ಬಿಟ್ಟು ಆಧುನಿಕ ವಿಜ್ಞಾನ(Modern Science) ಹಾಗೂ ತಂತ್ರಜ್ಞಾನದ
(Technology) ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಗಣಿತದ ಜನನಿ ಯಾರು..?
ಗಣಿತದ ಮೂಲಕಾರಣ ಯಾವುದು..? ಗೌಸ್(Gauss) ಎಂಬ ಪ್ರಸಿದ್ಧ ಗಣಿತಜ್ಞ "ಗಣಿತಶಾಸ್ತ್ರ
ಆಧುನಿಕ ವಿಜ್ಞಾನದ ಜನನಿ , ಗಣಿತದ ಜನನಿ ಸಂಖ್ಯಾಸಿದ್ಧಾಂತ" ಎಂದು ಹೇಳಿದ್ದಾನೆ.
ಹಾಗಾದರೆ ಸಂಖ್ಯಾಸಿದ್ಧಾಂತದ ಮೂಲಕಾರಣ ಯಾವುದು..? ಸಂಖ್ಯಾಸಿದ್ಧಾಂತದ ಮೂಲ
ಪ್ರಾಕೃತಿಕ (Natural Numbers) ಸಂಖ್ಯೆಗಳೆಂದು ಗಣಿತಜ್ಞರು ಹೇಳುತ್ತಾರೆ.
ಪ್ರಾಕೃತಿಕ ಸಂಖ್ಯೆಗಳಿಂದ ಸಂಖ್ಯಾಸಿದ್ಧಾಂತದ ವಿಕಾಸ, ಸಂಖ್ಯಾಸಿದ್ಧಾಂತದಿಂದ ಗಣಿತ,
ಗಣಿತದಿಂದ ಆಧುನಿಕವಿಜ್ಞಾನದ ವಿಕಾಸವೆಂದು ವಿಜ್ಞಾನಿಗಳೂ ಸಹ ನಂಬುತ್ತಾರೆ.
ಸಂಖ್ಯೆಗಳನ್ನು ಕಂಡುಹಿಡಿದಿದ್ದು ಮನುಷ್ಯರಲ್ಲ. ಅದು ಪ್ರಕೃತಿಯ ಕೊಡುಗೆ. ಕೇವಲ
ಮನುಷ್ಯರಿಗಷ್ಟೇ ಅಲ್ಲ, ಪಶು-ಪಕ್ಷಿಗಳಿಗೂ ಸಹ ಗಣನೆಯ ಜ್ಞಾನವಿರುತ್ತದೆ..!!
ಉದಾಹರಣೆಗೆ ಯಾವುದೋ ಒಂದು ಪಕ್ಷಿ ತನ್ನ ಗೂಡಿನಲ್ಲಿ ಹಲವು ಮರಿಗಳೊಂದಿಗೆ
ವಾಸವಿರುತ್ತದೆ. ದುರ್ದೈವವಶಾತ್ ಒಂದು ದಿನ ಪಕ್ಷಿಯ ಕೆಲವು ಮರಿಗಳು
ನಾಪತ್ತೆಯಾಗುತ್ತವೆ. ಆ ವಿಷಯ ಪಕ್ಷಿಗೆ ತಿಳಿದು ಆತಂಕದಿಂದ ಅತ್ತ ಇತ್ತ ಕಿರುಚುತ್ತಾ
ಹಾರಾಡುವುದನ್ನು ನೋಡಬಹುದು. ಮನೆಯಲ್ಲಿರುವ ಬೆಕ್ಕು ಮೂರು ಮರಿಗಳನ್ನು ಹಾಕಿರುತ್ತದೆ.
ಅವುಗಳಲ್ಲಿ ಒಂದು ಮರಿ ನಾಪತ್ತೆಯಾದರೆ ಬೆಕ್ಕಿನ ಪ್ರಲಾಪ ಹೇಗಿರುತ್ತದೆಂಬುದನ್ನು
ಗಮನಿಸಬಹುದು. ಹಾಗಾದರೆ ಪಶು ಪಕ್ಷಿಗಳಿಗೆ ಸಂಖ್ಯಾಜ್ಞಾನವನ್ನು ನೀಡಿದವರು ಯಾರು..?
ಯಾರೂ ಅಲ್ಲ ಪ್ರಕೃತಿಯೇ. ಪ್ರಕೃತಿ ನೀಡಿದ ಗಣನಾಸಾಮರ್ಥ್ಯದಿಂದ ಪಶುಪಕ್ಷಿಗಳೂ ಸಹ
ಸಂಖ್ಯೆಯನ್ನು ಅರಿಯಲು ಸಮರ್ಥವಾಗಿವೆ.
ಹಾಗಾದರೆ ಪ್ರಾಕೃತಿಕ ಸಂಖ್ಯೆಗಳ ಮೂಲಕಾರಣ ಯಾವುದು..? ಅದು ಪ್ರಕೃತಿ. ಪ್ರಕೃತಿಯ
ಮೂಲಕಾರಣ ಯಾರು ? ಭಗವಂತ..!! ಕ್ರೋನೆಕರ್ (Kronecker) ಎಂಬ ಗಣಿತಜ್ಞ ‘Natural
numbers are God given bricks’(ಪ್ರಾಕೃತಿಕ ಸಂಖ್ಯೆಗಳು ದೇವರು ಕೊಟ್ಟ ಇಟ್ಟಿಗೆ)
ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
ಹೇಗೆ ಇಟ್ಟಿಗೆಗಳಿಂದ ಭವನಗಳನ್ನು ನಿರ್ಮಿಸುತ್ತೇವೆಯೋ ಹಾಗೇ ಪ್ರಾಕೃತಿಕಸಂಖ್ಯೆಗಳಿಂದ
ಸಂಖ್ಯಾಸಿದ್ಧಾಂತದ ನಿರ್ಮಾಣವಾಗುತ್ತದೆ. ಸಂಖ್ಯಾಸಿದ್ಧಾಂತದಿಂದ ಗಣಿತ, ಗಣಿತದಿಂದ
ಆಧುನಿಕ ವಿಜ್ಞಾನದ ವಿಕಾಸವಾಗುತ್ತದೆ. ಹಾಗಾಗಿ ವಿಜ್ಞಾನದ ಮೂಲಕಾರಣ ಯಾರು..? ಭಗವಂತ.
ಆತನಿಂದ ಸೃಷ್ಟಿಸಲ್ಪಟ್ಟ ಪ್ರಕೃತಿ ಎಂಬುದು ಸ್ಪಷ್ಟವಾಗುತ್ತದೆ.