"ಬ್ಯಾಂಡ್" ಅಂದರೆ ತಟ್ಟನೆ ನೆನಪಾಗುವುದು ತಾಳಲಯವಿಲ್ಲದ ಪಾಶ್ಚಾತ್ಯ
ಸಂಗೀತ,ಕರ್ಣಕಠೋರ ಧ್ವನಿವರ್ಧಕಗಳು,ನಶೆ,ವಿಕೃತ ನೃತ್ಯ,ಉನ್ಮಾದತೆ ಇತ್ಯಾದಿಗಳೇ.ಹಲವು
ಭಾರತೀಯರಿಗೆ ಇಂತಹ ಬ್ಯಾಂಡ್ಗಳು ಇಷ್ಟವಾಗುವುದಿಲ್ಲ.ಆದರೆ "ಬ್ಯಾಂಡ್" ಎಂಬ ಶಬ್ದಕ್ಕೆ
ಮಧುರವಾದ ಅರ್ಥ ತರುತ್ತಿದೆ "ಧ್ರುವ ಬ್ಯಾಂಡ್".ಧ್ರುವ ಬ್ಯಾಂಡಿನ ವೈಶಿಷ್ಟ್ಯತೆ
ಏನೆಂದರೆ,ದೇಶೀ ಸಂಗೀತದೊಂದಿಗೆ,ತುಸು ಪಾಶ್ಚಾತ್ಯ ಸಂಗೀತವನ್ನನುಸರಿಸಿ,ಸಂಸ್ಕೃತ
ಸ್ತೋತ್ರ,ವೇದಮಂತ್ರಗಳನ್ನು ಪ್ರಸ್ತುತಪಡಿಸುವುದು..!! ಇಂತಹ ಅದ್ಭುತ ಉಪಾಯ
ಹೊಳೆದದ್ದು ಸಂಸ್ಕೃತ ವಿದ್ವಾಂಸ ಶ್ರೀ ಸಂಜಯ್ ದ್ವಿವೇದಿಯವರಿಗೆ.ಕೇಳಲು
ಇಂಪಾಗಿರುವ,ಮನಸ್ಸಿಗೆ ಶಾಂತಿ ನೀಡುವ ಸಂಸ್ಕೃತ ಶ್ಲೋಕ,ಸ್ತೋತ್ರ,ಮಂತ್ರಗಳಿಗೆ ಸಂಗೀತದ
ಸ್ಪರ್ಶ ನೀಡಿ.ದೇಶ-ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು
ನಡೆಸುತ್ತಾ,ವಿಶ್ವಾದ್ಯಂತ ಪ್ರಸಿದ್ಧವಾಗುತ್ತಿದೆ,ವಿಶ್ವದ ಏಕೈಕ "ಸಂಸ್ಕೃತ ಬ್ಯಾಂಡ್"
ಎಂಬ ಹೆಗ್ಗಳಿಕೆಯನ್ನು ಗಳಿಸಿರುವ "ಧ್ರುವ ಸಂಸ್ಕೃತ
ಬ್ಯಾಂಡ್’.ಶ್ಲೋಕ,ಮಂತ್ರ,ಸಂಸ್ಕೃತಭಾ ಷೆಯ ಪ್ರಚಾರವನ್ನು ವಿಶ್ವಾದ್ಯಂತ ಮಾಡುವುದೇ
ಧ್ರುವ ಸಂಸ್ಕೃತ ಬ್ಯಾಂಡಿನ ಮೂಲ ಉದ್ದೇಶ.
"ಸಂಗೀತ ಯಾವುದೇ ರೂಪದಲ್ಲಿದ್ದರೂ ಅದು ಮನಸ್ಸಿನಲ್ಲಿ ಒಳ್ಳೆಯ ಯೋಚನೆಯನ್ನೇ
ತುಂಬುತ್ತದೆ. ಶಾಸ್ತ್ರೀಯ ಸಂಗೀತ ನೇರವಾಗಿ ಹೃದಯಗಳ ಜೊತೆಗೆ ಸಂಬಂಧವನ್ನು
ಬೆಸೆಯುತ್ತದೆ. ಸಂಸ್ಕೃತ ಶ್ಲೋಕಗಳು ಇವೆಲ್ಲಕ್ಕಿಂತ ವಿಭಿನ್ನ. ಇದು ಹೃದಯಗಳ ಜೊತೆ
ಸಂಬಂಧ ಬೆಳೆಸುವುದರ ಜೊತೆಗೆ ಆತ್ಮಗಳ ಜೊತೆಗೂ ನಂಟು ಬೆಳೆಸುತ್ತದೆ ”ಎಬುದು ಧ್ರುವ
ಬ್ಯಾಂಡ್ ಸಂಸ್ಥಾಪಕ ಶ್ರೀ ಸಂಜಯ ದ್ವಿವೇದಿಯವರ ಅಭಿಪ್ರಾಯ.
"ಧ್ರುವ" ಬ್ಯಾಂಡಿಗೆ ಜಗತ್ತಿನಾದ್ಯಂತ ಅತ್ಯುತ್ತಮ ಪ್ರೋತ್ಸಾಹ
ಸಿಗುತ್ತಿದೆ.ವೇದಮಂತ್ರಗಳ,ಶ್ರೀ ಶಂಕರಾಚಾರ್ಯರ ಸ್ತೋತ್ರಗಳ,ಸಂಸ್ಕೃತ ನಾಟಕಗಳ ಮೂಲಕ
ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತದೆ.ಇದಲ್ಲದೇ ಸ್ವಯಂರಚಿತ ಸಂಸ್ಕೃತ
ಗೀತೆ,ಕಥೆಗಳನ್ನೂ ಸಂಸ್ಕೃತ ಬ್ಯಾಂಡಿನಲ್ಲಿ ನಿರೂಪಿಸಿ ಸಂಸ್ಕೃತಾಭಿಮಾನಿಗಳನ್ನು
ರಂಜಿಸುವ ಕಾರ್ಯ ಮುಂದುವರಿದಿದೆ.ಒಟ್ಟಿನಲ್ಲಿ ಧ್ರುವ ಸಂಗೀತ ಕ್ಷೇತ್ರದಲ್ಲಿ ಹೊಸ
ಅಲೆಯನ್ನೇ ಸೃಷ್ಟಿಸಿ,ಸಂಸ್ಕೃತ ಭಾಷೆಯ ಪ್ರಸಾರವನ್ನು ಮುಂದುವರಿಸಿದೆ.
ಸಂಗೀತ,ಕರ್ಣಕಠೋರ ಧ್ವನಿವರ್ಧಕಗಳು,ನಶೆ,ವಿಕೃತ ನೃತ್ಯ,ಉನ್ಮಾದತೆ ಇತ್ಯಾದಿಗಳೇ.ಹಲವು
ಭಾರತೀಯರಿಗೆ ಇಂತಹ ಬ್ಯಾಂಡ್ಗಳು ಇಷ್ಟವಾಗುವುದಿಲ್ಲ.ಆದರೆ "ಬ್ಯಾಂಡ್" ಎಂಬ ಶಬ್ದಕ್ಕೆ
ಮಧುರವಾದ ಅರ್ಥ ತರುತ್ತಿದೆ "ಧ್ರುವ ಬ್ಯಾಂಡ್".ಧ್ರುವ ಬ್ಯಾಂಡಿನ ವೈಶಿಷ್ಟ್ಯತೆ
ಏನೆಂದರೆ,ದೇಶೀ ಸಂಗೀತದೊಂದಿಗೆ,ತುಸು ಪಾಶ್ಚಾತ್ಯ ಸಂಗೀತವನ್ನನುಸರಿಸಿ,ಸಂಸ್ಕೃತ
ಸ್ತೋತ್ರ,ವೇದಮಂತ್ರಗಳನ್ನು ಪ್ರಸ್ತುತಪಡಿಸುವುದು..!! ಇಂತಹ ಅದ್ಭುತ ಉಪಾಯ
ಹೊಳೆದದ್ದು ಸಂಸ್ಕೃತ ವಿದ್ವಾಂಸ ಶ್ರೀ ಸಂಜಯ್ ದ್ವಿವೇದಿಯವರಿಗೆ.ಕೇಳಲು
ಇಂಪಾಗಿರುವ,ಮನಸ್ಸಿಗೆ ಶಾಂತಿ ನೀಡುವ ಸಂಸ್ಕೃತ ಶ್ಲೋಕ,ಸ್ತೋತ್ರ,ಮಂತ್ರಗಳಿಗೆ ಸಂಗೀತದ
ಸ್ಪರ್ಶ ನೀಡಿ.ದೇಶ-ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು
ನಡೆಸುತ್ತಾ,ವಿಶ್ವಾದ್ಯಂತ ಪ್ರಸಿದ್ಧವಾಗುತ್ತಿದೆ,ವಿಶ್ವದ ಏಕೈಕ "ಸಂಸ್ಕೃತ ಬ್ಯಾಂಡ್"
ಎಂಬ ಹೆಗ್ಗಳಿಕೆಯನ್ನು ಗಳಿಸಿರುವ "ಧ್ರುವ ಸಂಸ್ಕೃತ
ಬ್ಯಾಂಡ್’.ಶ್ಲೋಕ,ಮಂತ್ರ,ಸಂಸ್ಕೃತಭಾ
ಧ್ರುವ ಸಂಸ್ಕೃತ ಬ್ಯಾಂಡಿನ ಮೂಲ ಉದ್ದೇಶ.
"ಸಂಗೀತ ಯಾವುದೇ ರೂಪದಲ್ಲಿದ್ದರೂ ಅದು ಮನಸ್ಸಿನಲ್ಲಿ ಒಳ್ಳೆಯ ಯೋಚನೆಯನ್ನೇ
ತುಂಬುತ್ತದೆ. ಶಾಸ್ತ್ರೀಯ ಸಂಗೀತ ನೇರವಾಗಿ ಹೃದಯಗಳ ಜೊತೆಗೆ ಸಂಬಂಧವನ್ನು
ಬೆಸೆಯುತ್ತದೆ. ಸಂಸ್ಕೃತ ಶ್ಲೋಕಗಳು ಇವೆಲ್ಲಕ್ಕಿಂತ ವಿಭಿನ್ನ. ಇದು ಹೃದಯಗಳ ಜೊತೆ
ಸಂಬಂಧ ಬೆಳೆಸುವುದರ ಜೊತೆಗೆ ಆತ್ಮಗಳ ಜೊತೆಗೂ ನಂಟು ಬೆಳೆಸುತ್ತದೆ ”ಎಬುದು ಧ್ರುವ
ಬ್ಯಾಂಡ್ ಸಂಸ್ಥಾಪಕ ಶ್ರೀ ಸಂಜಯ ದ್ವಿವೇದಿಯವರ ಅಭಿಪ್ರಾಯ.
"ಧ್ರುವ" ಬ್ಯಾಂಡಿಗೆ ಜಗತ್ತಿನಾದ್ಯಂತ ಅತ್ಯುತ್ತಮ ಪ್ರೋತ್ಸಾಹ
ಸಿಗುತ್ತಿದೆ.ವೇದಮಂತ್ರಗಳ,ಶ್ರೀ ಶಂಕರಾಚಾರ್ಯರ ಸ್ತೋತ್ರಗಳ,ಸಂಸ್ಕೃತ ನಾಟಕಗಳ ಮೂಲಕ
ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತದೆ.ಇದಲ್ಲದೇ ಸ್ವಯಂರಚಿತ ಸಂಸ್ಕೃತ
ಗೀತೆ,ಕಥೆಗಳನ್ನೂ ಸಂಸ್ಕೃತ ಬ್ಯಾಂಡಿನಲ್ಲಿ ನಿರೂಪಿಸಿ ಸಂಸ್ಕೃತಾಭಿಮಾನಿಗಳನ್ನು
ರಂಜಿಸುವ ಕಾರ್ಯ ಮುಂದುವರಿದಿದೆ.ಒಟ್ಟಿನಲ್ಲಿ ಧ್ರುವ ಸಂಗೀತ ಕ್ಷೇತ್ರದಲ್ಲಿ ಹೊಸ
ಅಲೆಯನ್ನೇ ಸೃಷ್ಟಿಸಿ,ಸಂಸ್ಕೃತ ಭಾಷೆಯ ಪ್ರಸಾರವನ್ನು ಮುಂದುವರಿಸಿದೆ.
No comments:
Post a Comment