ಧನ್ವಂತರಿ
ನಂದಾದೀಪವೆಂದರೆ ಶಾಶ್ವತದೀಪ. ಅಜ್ಞಾನದ ಅಂಧಕಾರವನ್ನು ನೀಗಿ, ಜ್ಞಾನವನ್ನು ನೀಡುವ ಪ್ರತೀಕ. ಭವದ ಬೇಗುದಿಗಳಿಂದ ಹೊರಬಂದು, ಸನಾತನ ಸಂಸ್ಕೃತಿಯ ಜ್ಞಾನದಲ್ಲಿ ಮಿಂದು ಪುನೀತವಾಗುವ ತವಕ.
Tuesday, 9 August 2016
ಧನ್ವಂತರಿ
ದೇವತೆಗಳಿಗೂ
ವೈದ್ಯ ಧನ್ವಂತರೀ.ಧನ್ವಂತರಿಯನ್ನು ಮಹಾವಿಷ್ಣುವಿನ ಅವತಾರವೆಂದೇ ಗುರುತಿಸಲಾಗುತ್ತದೆ.ಮಹಾ
ಚಿಕಿತ್ಸಕನಾದ್ದರಿಂದ ಆತ ದೈವತ್ವಪದವಿಯನ್ನೂ ಪಡೆದ.ದೇವಾಸುರರು ಸಮುದ್ರವನ್ನು ಮಥಿಸುವಾಗ
ಧನ್ವಂತರಿಯ ಅವತಾರವಾಯಿತು.ಶರತ್ ಋತುವಿನ ಪೂರ್ಣಿಮೆಯಂದು ಚಂದ್ರನ,ಕಾರ್ತಿಕ ದ್ವಾದಶಿಯಂದು
ಕಾಮಧೇನುವಿನ,ತ್ರಯೋದಶಿಯಂದು ಧನ್ವಂತರಿಯ,ಚತುರ್ದಶಿಯಂದು ಕಾಳಿ ಮಾತೆಯ,ಅಮಾವಾಸ್ಯೆಯಂದು
ಮಹಾಲಕ್ಷ್ಮಿಯ ಪ್ರಾದುರ್ಭಾವವಾಯಿತು.ಹಾಗಾಗಿ ದೀಪಾವಳಿ ಹಬ್ಬದ ಎರಡು ದಿನ ಮುನ್ನ ಧನ್ವಂತರಿ
ಅವತಾರದ ಸ್ಮರಣೆಗಾಗಿ "ಧನತೇರಸ್" ಎಂಬ ಹಬ್ಬವನ್ನು ಆಚರಿಸಲಾಗುತ್ತದೆ.
Subscribe to:
Post Comments (Atom)
No comments:
Post a Comment